32.5 C
ಮಂಗಳೂರು
September 18, 2026
Bhakthi News

ನಾಗಬನ ಎಂದರೆ ನಾಗದೇವನಿಗೆ ಮೀಸಲಾದ ಪವಿತ್ರ ಕಾಡು ಅಥವಾ ವೃಕ್ಷಗಳ ತಾಣ ಕೇವಲ ಧಾರ್ಮಿಕ ಆರಾಧನಾ ಸ್ಥಳವಷ್ಟೇ ಅಲ್ಲದೆ, ನೂರಾರು ವಿಧದ ಔಷಧೀಯ ಸಸ್ಯಗಳು ಮತ್ತು ಜೀವವೈವಿಧ್ಯ ರಕ್ಷಿಸುವ ಪ್ರಾಚೀನ ಪರಿಸರ ಸಂರಕ್ಷಣಾ ಕೇಂದ್ರ.

ನಾಗಬನ ಎಂದರೆ ನಾಗದೇವನಿಗೆ ಮೀಸಲಾದ ಪವಿತ್ರ ಕಾಡು ಅಥವಾ ವೃಕ್ಷಗಳ ತಾಣ. ಇದು ಕೇವಲ ಧಾರ್ಮಿಕ ಆರಾಧನಾ ಸ್ಥಳವಷ್ಟೇ ಅಲ್ಲದೆ, ನೂರಾರು ವಿಧದ ಔಷಧೀಯ ಸಸ್ಯಗಳು ಮತ್ತು ಜೀವವೈವಿಧ್ಯವನ್ನು ರಕ್ಷಿಸುವ ಪ್ರಾಚೀನ ಪರಿಸರ ಸಂರಕ್ಷಣಾ ಕೇಂದ್ರವಾಗಿದೆ.

ನಾಗಬನ ಮತ್ತು ಪ್ರಕೃತಿ ಸಂಬಂಧ

ಸಸ್ಯ ಸಂಕುಲ: ಸಾಂಪ್ರದಾಯಿಕ ನಾಗಬನಗಳಲ್ಲಿ ೬೦ ರಿಂದ ೭೦ಕ್ಕೂ ಹೆಚ್ಚು ವಿವಿಧ ಜಾತಿಯ ಮರಗಳು ಮತ್ತು ಬಳ್ಳಿಗಳು ಇರುತ್ತವೆ.

ವನ್ಯಜೀವಿ ರಕ್ಷಣೆ: ಇಲ್ಲಿ ಮರಗಳನ್ನು ಕಡಿಯದ ಕಾರಣ ಹಕ್ಕಿಗಳು, ಸರೀಸೃಪಗಳು ಹಾಗೂ ಇತರೆ ಸೂಕ್ಷ್ಮ ಜೀವಗಳಿಗೆ ಇದು ಸುರಕ್ಷಿತ ನೆಲೆ. ನಾಗನ ಮರ ಬಳ್ಳಿಗಳನ್ನು ಮುಟ್ಟಿದರೂ ಮನೆಗೆ ನಾಗ ಜತೆಯಲ್ಲೇ ಬರುತ್ತಿದ್ದ ಕಾಲ ಇತ್ತು. ಅದಕ್ಕಾಗಿ ನಾಗ ಬನವನ್ನು ಯಾರು ಕಡಿಯುತ್ತಿರಲಿಲ್ಲ.

ಜಲಮೂಲಗಳ ಸಂರಕ್ಷಣೆ: ದಟ್ಟವಾದ ಮರಗಳ ಬೇರುಗಳು ಭೂಮಿಯ ತೇವಾಂಶ ಕಾಪಾಡುತ್ತವೆ. ಹುತ್ತಗಳು ಇದು ಅಂತರ್ಜಲ ಮಟ್ಟ ಹೆಚ್ಚಲು ಸಹಕಾರಿ.

ವಾತಾವರಣ ಶುದ್ಧೀಕರಣ: ಪ್ರಕೃತಿಯ ಮಡಿಲಲ್ಲಿರುವ ಈ ತಾಣಗಳು ಆಮ್ಲಜನಕದ ಮೂಲವಾಗಿ ಮತ್ತು ಹಸಿರು ಹೊದಿಕೆಯಾಗಿ ಪರಿಸರ ಸಮತೋಲನ ಕಾಯ್ದುಕೊಳ್ಳುತ್ತವೆ. ಪರಿಸರ ಸ್ನೇಹಿಯಾದ ಹಾವುಗಳನ್ನು ಸಂತಾನ ನಶಿಸುತ್ತಿದೆ.ಅದರೆ ಹಾವುಗಳು ಸಂತಾನೋತ್ಪತ್ತಿ ಮಾಡುವುದೇ ಇಂತಹ ತಂಪು ಪ್ರದೇಶದ ಪ್ರಕೃತಿಯ ಮಡಿಲಲ್ಲಿ. ಅದರೆ ಇಂದು ಕಾಂಕ್ರೀಟ್ ಗುಡಿಗಳನ್ನು ಕಟ್ಟಿ ಅದರೊಳಗೆ ಟೈಲ್ಸ್ ಗಳನ್ನು ಹಾಕಿ ಅಲ್ಲಿ ಮರಪೊದೆಗಳನ್ನು ಕಡಿದು ಆ ಕಾಂಕ್ರೀಟ್ ಗುಡಿಗಳಿಗೆ ನೆರಳಿಗೆ ಶೀಟುಗಳನ್ನ ಹಾಕಿರುವ ನಾಗ ಬನಗಳು ಎಲ್ಲೆಡೆ ಕಾಣಿಸುತ್ತವೆ.ಇನ್ನಾದರೂ ನಾಗಬನ ಉಳಿಸಿ ಬೆಳೆಸಿ ಕಾಡು ಮರ ಬಳ್ಳಿಯ ಮಧ್ಯೆ ನಾಗಬನ ಇರಲಿ ಕಾಂಕ್ರೀಟ್ ಕಾಡಿನ ಮಧ್ಯೆ ಗುಡಿ ಕಟ್ಟಿ ಅದರೊಳಗೆ ನಾಗನ ವಿಗ್ರಹ ,ಚಿತ್ರಕೂಟ ರಚಿಸುದಕ್ಕಿಂತ ನೇಚರ್ ನಾಗನ ಬನ ಉಳಿಯಲಿ. ಹೆಚ್ವಿನ ಕಡೆ ಪ್ರಕೃತಿ ದತ್ತ ವಾಗಿ ಅರಿವು ಇದ್ದವರು ಉಳಿಸಿದ್ದಾರೆ. ಈ ಚಿತ್ರ ಪೈವಳಿಕೆಯ ಗ್ರಾಮದ ಕುರ್ಯಗುತ್ತು ಮತ್ತು ಬೈಲುಕುರಿಯದವರ ಸ್ಥಳದಲ್ಲಿ ಕಂಡುಬರುವ ನಾಗನ ಅಲಡೆ. ಚಿತ್ರಕೂಟದ ಮಧ್ಯೆ ಚತುರ್ಮುಖವಾಗಿ ನಾಗೆ,ಕನ್ನಿಕೆ,ಯಕ್ಷಿ,ದೇವತೆಗಳ ಶಿವಶಕ್ತಿಯ ಒಂದು ಕೂಟ ಅಲಡೆ ಇದಾಗಿದೆ .ನೆಚುರಲ್ ಅಗಿ ಈಗಾಲೂ ಹರಿದು ಹೋಗುವ ನೀರಿನಾಶ್ರಯವಿರುವ ಜಲಸಂಪನ್ಮೂಲ ಕಣಿಯ ಬದಿಯಲ್ಲೇ ಈ ನಾಗನ ಹಳೆಯ ಕಾಲದ ಚಿತ್ರಕೂಟ ಇಲ್ಲಿದೆ ನೋಡಲು ಬಹಳ ಸುಂದರವಾಗಿದೆ.ಇಂತಹ ನಾಗಬನಗಳು ಮುಂದೇ ಅದರೂ ಮುಂದಿನ ಪೀಳಿಗೆಗೆ ಯಥಾಪ್ರಕಾರ ಉಳಿಯಬೇಕು.

ಬರಹ: ರಾಜೇಶ್ ದಡ್ಡಂಗಡಿ

Related posts

ರಾಯರ ಭಕ್ತರು ಮಂಜೇಶ್ವರ’ ವತಿಯಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355 ನೇ ಆರಾಧನಾ ಮಹೋತ್ಸವ : ಆಮಂತ್ರಣ ಪತ್ರಿಕೆ ಬಿಡುಗಡೆ

metromed

ಆಗಸ್ಟ್ 24ರಿಂದ 28ರವರೆಗೆ ಮಂಗಳೂರಿನ ಶ್ರೀ ಯೋಗೇಶ್ವರ ಕದ್ರಿ ಮಠದಲ್ಲಿ ಶ್ರೀಮದ್ ಲಕ್ಷ್ಮೀ ನಾರಾಯಣ ಮಹಾಯಾಗ

metromed

ಆಟಿ ಅಮಾವಾಸ್ಯೆ: ನರಹರಿ ದೇವಸ್ಥಾನಕ್ಕೆ ಮಾಜಿ ಸಚಿವರಾದ ರಮನಾಥ ರೈ ಭೇಟಿ

metromed

Leave a Comment